Slide
Slide
Slide
previous arrow
next arrow

ಆಡಳಿತ ಸೌಧದಲ್ಲಿ ವೃದ್ಧನ ಮೇಲೆ ಜೇನು ದಾಳಿ: ಆಸ್ಪತ್ರೆಗೆ ದಾಖಲು

300x250 AD

ಭಟ್ಕಳ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಜೇನುಗೂಡು ಕಟ್ಟಿದ್ದು, ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರ ಮೇಲೆ ಜೇನುನೊಣಗಳು ದಾಳಿ ನಡೆಸುತ್ತಿವೆ. ಇಂಥದ್ದೇ ಘಟನೆ ಪುನರಾವರ್ತನೆಯಾಗಿದ್ದು 75 ವರ್ಷದ ಹಿರಿಯರೊಬ್ಬರ ಮೇಲೆ ದಾಳಿ ಮಾಡಿದ್ದರಿಂದ ಅವರು ಆಸ್ಪತ್ರೆ ಸೇರಿದ್ದಾರೆ.

ಸುರೇಶ ಬಾಳಗಿ ಎಂಬುವವರ ಮೇಲೆ ಜೇನುನೊಣ ದಾಳಿ ನಡೆಸಿವೆ. ಸುರೇಶ ಬಾಳಗಿ ಕಾರು ಚಾಲಕ, ಕೃಷ್ಣಾನಂದ ಪ್ರಭು ಸೇರಿ ಇತರರು ತಾಲೂಕು ಆಡಳಿತ ಸೌಧದ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದರು. ಮರಳಿ ಬರುವಾಗ ಕಚೇರಿಯಲ್ಲಿದ್ದ ಜೇನುನೊಣಗಳು ಹಠಾತ್ ದಾಳಿ ನಡೆಸಿದ್ದರಿಂದ ಸುರೇಶ ಅವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

300x250 AD

ಸರ್ಕಾರಿ ಕಚೇರಿ ಸುತ್ತಲೂ ಹಲವು ಕಡೆಗಳಲ್ಲಿ ಜೇನುನೊಣಗಳು ಗೂಡು ಕಟ್ಟಿದ್ದು, ಸಾರ್ವಜನಿಕರು ಭಯದಲ್ಲೇ ಕಚೇರಿಗಳಿಗೆ ಬರುತ್ತಿದ್ದಾರೆ. ಕೂಡಲೇ ಇವುಗಳನ್ನು ತೆರವುಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top